History

ಕುಶಾನರು – Kushan Empire

Share With Friends

✦ ಮೌರ್ಯ ಸಾಮ್ರಾಜ್ಯದ ಪತನದ ನಂತರ ಭಾರತದಲ್ಲಿ ವಿಶಾಲ ಸಾಮ್ರಾಜ್ಯ ಸ್ಥಾಪಿಸಿದ ಕೀರ್ತಿ ಕುಶಾನರದು.
✦ ಇವರ ಸಾಮ್ರಾಜ್ಯ ಉತ್ತರ ಭಾರತವನ್ನಲ್ಲದೇ ಮಧ್ಯ ಏಷ್ಯದವರೆಗೂ ಹಬ್ಬಿತ್ತು.
✦ ಗಾಂಧಾರ ಕಲೆ ಮತ್ತು ಮಹಾಯಾನ ಪಂಥಗಳನ್ನು ಪೋಷಿಸಿ ಬೆಳೆಸಿದರು.

✦ ಆಧಾರಗಳು :
ಕುಶಾನರ ಚರಿತ್ರೆ ತಿಳಿಯಲು ನಮಗೆ ಹಲವಾರು ಶಾಸನ, ನಾಣ್ಯ ಹಾಗೂ ಸಾಹಿತ್ಯ ಕೃತಿಗಳು ಲಭ್ಯವಾಗಿವೆ.
*ಸಾಹಿತ್ಯ ಕೃತಿಗಳಲ್ಲಿ
*ಅಶ್ವಘೋಷನ- ಬುದ್ಧಚರಿತ
*ನಾಗಾರ್ಜುನನ- ಮಾಧ್ಯಮಿಕ ಸೂತ್ರ
*ಕಲ್ಹಣನ- ರಾಜತರಂಗಿಣಿ
*ಕುಮಾರಲತನ-ಕಲ್ಪನಾಮಂದಿರ ಪ್ರಮುಖವಾದುವು.

✦ ಹಯಾನರ ಕಾಲದ ಚೀನೀ ಚರಿತ್ರಕಾರ ಪಾನ-ಕು, ಚಂಗಕುಯಿನ್, ಮತ್ತು ಹ್ಯೂಯನತ್ಸಾಂಗ ಎಂಬ ಚೀನಿಯರ ಬರವಣಿಗೆಗಳು ಕುಶಾನರ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತವೆ.
✦ ಇವುಗಳ ಜೊತೆಗೆ ಮೂರ್ತಿ ಶಿಲ್ಪಗಳು, ಸ್ತೂಪಗಳು, ಅಂದಿನ ಸಾಮಾಜಿಕ, ಆರ್ಥಿಕ, ಮತ್ತು ಧಾರ್ಮಿಕ ಜೀವನದ ಕುರಿತು ಮಾಹಿತಿ ನೀಡುತ್ತವೆ.

✦ಕುಶಾನರ ಮೂಲ
*ಚೀನಿ ಬರವಣಿಗೆಗಳ ಪ್ರಕಾರ ಕುಶಾನರು ಯೂಚಿ ಎಂಬ ಚೀನಾದ ಅಲೆಮಾರಿ ಪಂಗಡಕ್ಕೆ ಸೇರಿದವರಾಗಿದ್ದರು.
*ಅವರನ್ನು *ಟೊಚಾರಿಯನ್* ಎಂದೂ ಸಹ ಕರೆಯುತ್ತಿದ್ದರು.
*ಆರಂಭದಲ್ಲಿ ಇವರು ಮಧ್ಯ ಏಷ್ಯಾದಲ್ಲಿ ನೆಲೆಸಿದ್ದರು, ನಂತರ ಚೀನಾದ ಗಡಿಭಾಗವಾದ ತುರ್ಕಿಸ್ತಾನದ *ಕಾನಸು* ಎಂಬಲ್ಲಿ ನೆಲೆನಿಂತರು.
*ಸುಮಾರು ಕ್ರಿ.ಪೂ 165 ರಲ್ಲಿ ಅಲ್ಲಿ ವಾಸಿಸಿದ್ದ ಮತ್ತೊಂದು ಪಂಗಡ ಹಿಯಾಂಗನರು(ಹೂಣರು) ಯೂಚಿಗಳನ್ನು ಸೋಲಿಸಿ ಆ ಸ್ಥಳದಿಂದ ಹೊರಹಾಕಿದರು.
*ನಂತರ ಯೂಚಿಗಳು ದಕ್ಷಿಣಕ್ಕೆ ಚಲಿಸಿ ಟಿಬೆಟ್ ನಲ್ಲಿ ನೆಲೆನಿಂತರು.
*ಆಗ ಶಕರನ್ನು, ಪಾರ್ಥಿಯನ್ನರನ್ನು ಸೋಲಿಸಿ ಬ್ಯಾಕ್ಟ್ರಿಯಾ ಹಾಗೂ ಜಕ್ಸಾರ್ಟನ ನದಿ ಪ್ರದೇಶವನ್ನು ಆಕ್ರಮಿಸಿಕೊಂಡರು.
*ಇಲ್ಲಿಯೂ ಬಹುಕಾಲ ಉಳಿಯದ ಯೂಚಿಗಳು ಬ್ಯಾಕ್ಟ್ರಿಯಾದಲ್ಲಿ ಬಂದು ನೆಲೆಸಿ ಸೋಗ್ಡಿಯಾನವನ್ನು ತಮ್ಮ ರಾಜಧಾನಿಯಾಗಿ ಮಾಡಿಕೊಂಡರು.
*ಕಾಬೂಲ ಕಣಿವೆಯನ್ನು ದಾಟಿ ಹಿಂದೂಕುಷ ಪರ್ವತಶ್ರೇಣಿಯನ್ನು ಹಾದು ನಂದರ ಗಾಂಧಾರ ಪ್ರದೇಶವನ್ನು ವಶಪಡಿಸಿಕೊಂಡರು.
*ಆರಂಭದಲ್ಲಿ ಯೂಚಿಗಳಲ್ಲಿ ಕಿಷಾಂಗ್(kuc-i-shang), ಹುಮಿ, ಕುಯಿಶುಂಗ್, ಹಿಲೂಯಿನ್, ತುಮಿ, ಎಂಬ ಪಂಗಡಗಳಿದ್ದವು.
*’ಕಿಷಾಂಗ’ ಎಂಬ ಪದ ಮುಂದೆ *ಕುಶಾನ* ಎಂಬ ಹೆಸರು ಪಡೆಯಿತು.
*ಕಷಾಂಗರ ನಾಯಕ *ಕುಜಲ ಕಾಡಫೈಸೆಸನು 5 ರಾಜ್ಯಗಳನ್ನು ಒಟ್ಟುಗೂಡಿಸಿ ಕುಶಾನ ಸಂತತಿಯ ಸ್ಥಾಪಕನಾದನು. ✦ ರಾಜಕೀಯ ಇತಿಹಾಸ : ಕುಜಲ ಕಾಡಪೈಸೆಸ(ಕ್ರಿ.ಶ15-65)
✦ ಕುಜಲ ಕಾಡಪೈಸೆಸ* ಅಥವಾ 1 ನೇ ಕಾಡಪೈಸೆಸ ಕುಶಾನ ವಂಶದ ಸ್ಥಾಪಕ.
✦ ಈತ 5 ಯೂಚಿ ಬಣಗಳನ್ನು ಒಂದುಗೂಡಿಸಿ ವಾಂಗ್ ಅಥವಾ ರಾಜ ಎಂಬ ಬಿರುದು ಪಡೆದ.
✦ ಇವನು ಇಂಡೋಗ್ರೀಕರನ್ನು, ಶಕರನ್ನು, ಮತ್ತು ಪಾರ್ಥಿಯನ್ನರನ್ನು ಸೋಲಿಸಿ ಕಾಬೂಲ್, ಗಾಂಧಾರ(ಕಿಪಿನ), ತಕ್ಷಶಿಲಾ, ಕಂದಹಾರಗಳ ಒಡೆಯನಾದನು.
✦ ಇವನ ಸಾಮ್ರಾಜ್ಯವು ಪರ್ಶಿಯಾದಿಂದ ಸಿಂಧೂ ನದಿಯವರೆಗೂ ವ್ಯಾಪಿಸಿತ್ತು.
✦ ಇವನು ಚೀನಾ ಮತ್ತು ರೋಮ ಸಾಮ್ರಾಜ್ಯಗಳೊಂದಿಗೆ ವಾಣಿಜ್ಯ ಸಂಬಂಧ ಹೊಂದಿದ್ದನು.
✦ ಈತ ರೋಮನ್ನರ ಮಾದರಿಯಲ್ಲಿ ದೀನಾರ ಎಂಬ ತಾಮ್ರದ ನಾಣ್ಯಗಳನ್ನು ಹೊರಡಿಸಿದನು. ಅವುಗಳ ಮೇಲೆ ತನ್ನ ಬಿರುದುಗಳಾದ ಮಹಾರಾಜಾಧಿರಾಜ,ಮಹಾರಾಜ, ಮಹಾಂತಗಳನ್ನು ಖರೋಷ್ಠಿ ಲಿಪಿಯಲ್ಲಿ ಕೆತ್ತಿಸಿದನು.
✦ ಇವನು ಬೌದ್ಧ ಮತಾವಲಂಬಿಯಾಗಿದ್ದನು.

2ನೇ ಕಾಡಪೈಸೆಸ*( *ವಿಮಾ ಕಾಡಪೈಸೆಸ) ಕ್ರಿ.ಶ 65 -78

✦ಕುಜಲ ಕಾಡಪೈಸೆಸನನ ನಂತರ ಅವನ ಮಗ 2ನೇ ಕಾಡಪೈಸೆಸ ಅಧಿಕಾರಕ್ಕೆ ಬಂದನು.
✦ಇವನು ಭಾರತದ ಭೂಭಾಗಗಳನ್ನು ಗೆದ್ದ ಪ್ರಥಮ ಕುಶಾನ ದೊರೆ.
✦ಈತ ಪಂಜಾಬನ್ನು ಗೆದ್ದು ಗಂಗಾನದಿ ಬಯಲಿನವರೆಗೂ ನುಗ್ಗಿ ಬಂದನು.
✦ಇವನ ಸಾಮ್ರಾಜ್ಯವು ಪಶ್ಚಿಮದಲ್ಲಿ ಅಫಘಾನಿಸ್ತಾನ, ತುರ್ಕಿಸ್ತಾನ, ಬುಖಾರಾ, ಹಾಗೂ ರೋಮನ್ ಸಾಮ್ರಾಜ್ಯದ ಗಡಿಯವರೆಗೂ ವಿಸ್ತರಿಸಿತ್ತು.
✦ಈತ ದೊಡ್ಡ ಪ್ರಮಾಣದಲ್ಲಿ ಬಂಗಾರದ ನಾಣ್ಯಗಳನ್ನು ಟಂಕಿಸಿದನು. ಅವುಗಳ ಮೇಲೆ ತನ್ನ ಬಿರುದುಗಳಾದ ಸಮಗ್ರ ಪ್ರಪಂಚ ಒಡೆಯ, ಮಹಾರಾಜ, ರಾಜರರಾಜ, ಸರ್ವಲೋಕೆಶ್ವರ, ಮಹೇಶ್ವರಗಳನ್ನು ಕೆತ್ತಿಸಿದನು.
✦ಕಲವು ನಾಣ್ಯಗಳ ಮೇಲೆ ಶಿವ ಮತ್ತು ನಂದಿಯ ಚಿತ್ರಗಳಿದ್ದು ಅವನು ಶೈವ ಮತಾವಲಂಬಿಯಾಗಿದ್ದನೆಂದು ತಿಳಿಯುತ್ತದೆ.
✦ಪರಾಯಶಃ ಭಾರತದಲ್ಲಿ ಮೊದಲ ಬಾರಿಗೆ ಚಿನ್ನದ ನಾಣ್ಯಗಳನ್ನು ಟಂಕಿಸಿದ ಮೊದಲ ರಾಜ
✦ಕಾನಿಷ್ಕನು ಕುಶಾನರಲ್ಲೇ ಅತ್ಯಂತ ಪ್ರಸಿದ್ಧ ದೊರೆ.
✦ದಕ್ಷ ಆಡಳಿತಗಾರ ಮತ್ತು ವೀರಯೋಧ.
✦ಪೇಷಾವರ ಅಥವಾ ಪುರುಷಪುರ ಅವನ ರಾಜಧಾನಿಯಾಗಿತ್ತು.
✦ಮಥುರಾ ಅವನ ಎರಡನೆಯ ರಾಜಧಾನಿ
✦ಡಾ|| ಫ್ಲೀಟ್ ಕನ್ನಿಂಗ್ಹ್ಯಾಮ್ ರು ಕಾನಿಷ್ಕ ಕ್ರಿ.ಪೂ 58 ರಲ್ಲಿ ಅಧಿಕಾರಕ್ಕೆ ಬಂದನೆಂದು, ವಿಕ್ರಮಶಕ ವರ್ಷದ ಸ್ಥಾಪಕನೆಂದು ವಾದಿಸಿದ್ದಾರೆ.
ಆದರೆ ಇತ್ತೀಚಿನ ಸಂಶೋಧನೆಗಳ ಪ್ರಕಾರ ವಿಕ್ರಮಾದಿತ್ಯ ಅಥವಾ ಚಂದ್ರಗುಪ್ತನಿಂದ ಈ ಶಕೆ ಆರಂಭವಾಯಿತೆಂದು ತಿಳಿದುಬರುತ್ತದೆ.

✦ಕಾನಿಷ್ಕನ ದಿಗ್ವಿಜಯಗಳು :
✦ಕಾಶ್ಮೀರದ ಪ್ರಕೃತಿ ಸೌಂದರ್ಯಕ್ಕೆ ಮನಸೋತು ಕಾನಿಷ್ಕನು ಕಾಶ್ಮೀರವನ್ನು ಗೆದ್ದನೆಂದು ಊಹಿಸಲಾಗಿದೆ.
✦ಕಲ್ಹಣ ರಾಜತರಂಗಣಿಯಲ್ಲಿ ಕಾನಿಷ್ಕನು ಕಾಶ್ಮೀರವನ್ನು ವಶಪಡಿಸಿಕೊಂಡನೆಂದು ಹೇಳಿದ್ದಾನೆ.
✦ತನ್ನ ಹೆಸರಿನಲ್ಲಿ ಕಾನಿಷ್ಕಪುರ ಎಂಬ ಹೊಸ ನಗರವನ್ನು ನಿರ್ಮಿಸಿದನು.
✦ಬದ್ಧ ಬರಹಗಳು ಕಾನಿಷ್ಕನು ಮಗಧದ ಮೇಲೆ ದಾಳಿ ಮಾಡಿ ಪಾಟಲಿಪುತ್ರವನ್ನು ವಶಪಡಿಸಿಕೊಂಡನು.
✦ಟಬೆಟ್ ಹಾಗೂ ಚೀನಿ ಮೂಲಗಳು ಪಾಟಲೀಪುತ್ರ ಮತ್ತು ಸಾಕೇತಪುರ ಮೇಲಿನ ಕಾನಿಷ್ಕನ ದಾಳಿಯನ್ನು ಸಮರ್ಥಿಸಿವೆ.
✦ತಾನು ದೇವಪುತ್ರನೆಂದು ಚೀನಿ ರಾಜನ ಸ್ಥಾನಮಾನಕ್ಕೆ ಸಮಾನನೆಂದು ಹೇಳಿ ಚೀನಿ ರಾಜನಿಗೆ ಕೊಡುತ್ತಿದ್ದ ಕಪ್ಪಕಾಣಿಕೆ ನಿಲ್ಲಿಸಿದನು.
✦ ಕಾನಿಷ್ಕನಿಗೆ ಇದ್ದ ಬಿರುದು ಕೈಸರ್, ದೇವಪುತ್ರ,

Leave a Reply

Your email address will not be published. Required fields are marked *

error: Content Copyright protected !!