GKHistorySpardha Times

ಜೈನ ಧರ್ಮ ಮತ್ತು ಇತಿಹಾಸ : ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ

Share With Friends

ಜೈನ ಧರ್ಮ ಭಾರತದಲ್ಲಿ ಉಗಮಿಸಿದ ಒಂದು ಧರ್ಮ. ಈ ಧರ್ಮದ ಸಿದ್ಧಾಂತದ ಪ್ರಕಾರ ಇದು ವಿಶ್ವದ ಅನಂತ ಸತ್ಯಗಳ ಮೇಲೆ ಆಧಾರಿತವಾದ ಧರ್ಮ. ಪಾರಂಪರಿಕ ನಂಬಿಕೆಯ ಅನುಸಾರ, ಋಷಭದೇವ ಈ ಸತ್ಯಗಳನ್ನು ಮೊದಲು ಅರಿತವ. ಈ ಅರಿವನ್ನು ಪಡೆದವರು ತೀರ್ಥಂಕರರೆಂದು ಕರೆಯಲ್ಪಡುತ್ತಾರೆ. ಋಷಭದೇವನ ನಂತರ ಬಂದ 23 ತೀರ್ಥಂಕರರಲ್ಲಿ ಕೊನೆಯವ ವರ್ಧಮಾನ ಮಹಾವೀರ. ಜೈನ ಎಂದರೆ ‘ಜಿನ’ಎಂಬ ಶಬ್ಧದಿಂದ ಉತ್ಪತ್ತಿಯಾದ ಶಬ್ದವಾಗಿದ್ದು ಜಿನ ಎಂದರೆ ‘ಇಂದ್ರಿಯಗಳನ್ನು ಗೆದ್ದವನು’ ಎಂದು ಹೇಳಬಹುದು.ಕರ್ಮದ ಕಟ್ಟನ್ನು ಮುರಿದು ಸಂಸಾರವನ್ನು ದಾಟಿ ಮುಕ್ತಿಯನ್ನು ಪಡೆದವ ಜೀವರಿಗೆ ‘ಜಿನರು’ ಎಂದು ಹೆಸರು. ಜಿನರಿಂದ ಉಪದೇಶಿ ಸಲ್ಪಟ್ಟ ಧರ್ಮವೇ ಜೈನಧರ್ಮ.

ಜೈನಧರ್ಮವು ಅತ್ಯಂತ ಪ್ರಾಚೀನವಾದುದು. ಬೌದ್ಧ ಧರ್ಮಕ್ಕಿಂತ ಹಿಂದಿನದು. ಈ ಧರ್ಮದ ಆದಿ (ಮೊದಲನೆಯ) ತೀರ್ಥಂಕರ ಆದಿನಾಥ. ಇಪ್ಪತ್ನಾಲು ತೀರ್ಥಂಕರರಲ್ಲಿ ಮಹಾವೀರನು ಇಪ್ಪತ್ನಾಲ್ಕನೆಯ ತೀರ್ಥಂಕರ. ಇವನು ಗೌತಮ ಬುದ್ಧನ ಸಮಕಾಲೀನನಾಗಿದ್ದು ಜೈನ ಧರ್ಮವನ್ನು ಪ್ರಖ್ಯಾತಗೋಳಿಸಿದನು. ಒಂದು ಕಾಲದಲ್ಲಿ ಇದು ರಾಜ ಧರ್ಮವಾಗಿದ್ದು, 8 ನೇ ಶತಮಾನದ ನಂತರ ಅವನತಿ ಹೊಂದಿತು.

ಈಗ ಭಾರತದಲ್ಲಿ ಈ ಧರ್ಮದವರು ಅಲ್ಪ ಸಂಖ್ಯಾತರಾಗಿದ್ದು ಕೇವಲ 42 ಲಕ್ಷ ಜನರಿದ್ದಾರೆಂದು (ಜನಗಣತಿ 2001) ಅಂದಾಜು ಮಾಡಿದೆ.ಈ ಧರ್ಮದ ಕೆಲವರು ಬೆಲ್ಜಿಯಮ್, ಕೆನಡ, ಹಾಂಗ್ ಕಾಂಗ್, ಜಪಾನ್, ಸಿಂಗಪುರ, ಯು.ಎಸ್.ಎ. ಗಳಿಗೆ ವಲಸೆ ಹೋಗಿದ್ದಾರೆ. ಇವರಲ್ಲಿ ಅಕ್ಷರಸ್ಥರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಿದೆ ; ಅದು 91.4% (2001 ಜನಗಣತಿ) . ಈಧರ್ಮದವರ ಕೈ ಬರೆಹದ ಪ್ರತಿಗಳು ಭಾರತದಲ್ಲಿ ಅತ್ಯಂತ ಪ್ರಾಚೀನವಾದವುಗಳು. ತೀರ್ಥಂಕರರಾದ ಅರಿಷ್ಟನೇಮಿ, ಪಾರ್ಶ್ವನಾಥ , ಮಹಾವೀರನಿಗಿಂತ ಹಿಂದಿನವರು. ಉತ್ತರಾದ್ಯಾಯ ಸೂತ್ರಗಳಲ್ಲಿ ಪಾರ್ಶ್ವನಾಥನ ಹೆಸರು ಕಂಡು ಬರುವುದಾಗಿ ತಿಳಿದು ಬಂದಿದೆ.

✦ ಜೈನರ ಪ್ರಾಚೀನ ಗ್ರಂಥಗಳು :
ಪೂರ್ವ ಆಗಮಗಳು, ದೇವರ್ದಿ ಎಂಬುವನಿಂದ ಸಂಗ್ರಹವಾದವುಗಳು (ಕ್ರಿ . ಶ. 5 ನೇ ಶತಮಾನ. ) ಮತ್ತು ಅಂಗಗಳು ಇವು ಈ ದರ್ಶನದ ಪ್ರಮುಖ ಗ್ರಂಥಗಳು,- ಆದರೆ ಇವು ವಿಲುಪ್ತವಾಗಿವೆ ಎಂದು ಹೇಳುತ್ತಾರೆ. ಇವುಗಳ ಭಾಷೆ ಅರ್ಧಮಾಗಧಿ. ಕ್ರಿ.ಶ. 5 ನೇ ಶತಮಾನದ ನಂತರ ದರ್ಶನ ಗ್ರಂಥಗಳನ್ನು ರಚಿಸಿ ಪ್ರಚಾರ ಪಡಿಸಿದವರು – ಉಮಾಸ್ವಾಮಿ, ಕುಂದಕುಂದಾಚಾರ್ಯ, ಸಮಂತಭದ್ರ ಇತ್ಯಾದಿ.

ಪೂರ್ವವೆಂಬ ಹದಿನಾಲ್ಕು ಭಾಗಗಳಲ್ಲಿದ್ದ ಈ ಧರ್ಮದ ಸಾಹಿತ್ಯ ಹಿಂದೆ ಕಂಠಪಾಠದ ಮೂಲಕ ನೆನಪಿನಲ್ಲಿ ಉಳಿದು ಬಂದಿತ್ತು. ಆದರೆ ಕಾಲ ಕ್ರಮೇಣ ಬಹಳಷ್ಟು ನಶಿಸಿಹೋಗಿ ನಂತರ ಅಳಿದು ಉಳಿದವು.
ಬರವಣಿಗೆಯ ಮೂಲಕ ಅವರ ಮೂಲ ತತ್ವಗಳು ಉಳಿದು ಬಂದಿದೆ. ಮುಖ್ಯ ಗ್ರಂಥಗಳು ಧರ್ಮವಿಧಿಗಳ ಆಗಮಗಳು, ಅವು ನಲವತ್ತಾರು ಗ್ರಂಥಗಳಲ್ಲಿವೆ : ಹನ್ನೆರಡು ಅಂಗಗಳು; ಹನ್ನೆರಡು ಉಪಾಂಗ ಆಗಮಗಳು; ಆರು ಛೇದ ಸೂತ್ರಗಳು; ನಾಲ್ಕು ಮೂಲ ಸೂತ್ರಗಳು, ಹತ್ತು ಪ್ರಕಾಮಿಕ (ಪ್ರಾಥಮಿಕ) ಸೂತ್ರಗಳು ಮತ್ತು ಎರಡು ಚೂಲಿಕಾ ಸೂತ್ರಗಳು.

ದಿಗಂಬರ ಪಂಥದವರು ಈ ಆಗಮಗಳನ್ನು ಒಪ್ಪುತ್ತಾರಾದರೂ ಮೂಲವು ನಷ್ಟವಾಗಿರುವುದಾಗಿ ಹೇಳುತ್ತಾರೆ. ಅವರು ತಮ್ಮ ಆಧಾರ ಗ್ರಂಥವಾಗಿ ತಮ್ಮ ಮೂಲ ಆಚಾರ್ಯರು ಬರೆದ ಇಪ್ಪತ್ತೈದು ಗ್ರಂಥಗಳನ್ನು ಆಚರಣೆಗೆ ಆಧಾರವೆನ್ನುತ್ತಾರೆ. -ನಾಲ್ಕು ಪ್ರಥಮ ಅನುಯೋಗ, ನಾಲ್ಕು ಚರಣ ಅನುಯೋಗ, ನಾಲ್ಕು ಕರಣ ಅನುಯೋಗ, ಮತ್ತು ಹನ್ನೆರಡು ದ್ರವ್ಯ ಅನುಯೋಗ. ಜೈನರ ಕೈಬರೆಹದ ಗ್ರಂಥಗಳು ಪತಾನ್, ಜೈಸಲಮೇರಿ ನಲ್ಲಿ ದೊಡ್ಡ ಸಂಗ್ರವಿದೆ.

✦ ಕರ್ನಾಟಕದಲ್ಲಿ ಜೈನ ಧರ್ಮ :
ಕರ್ನಾಟಕ, ದಕ್ಷಿಣ ಭಾರತದಲ್ಲಿನ ಒಂದು ರಾಜ್ಯ, ಜೈನ ಧರ್ಮ ಕರ್ನಾಟಕದಲ್ಲಿ ಬಹಳ ಹಿಂದಿನಿಂದಲೂ ಪ್ರಚಲಿತವಾಗಿದೆ , ಇಲ್ಲಿನ ಹಲವಾರು ಸಾಮ್ರಾಜ್ಯಗಳು (ಪಶ್ಚಿಮ ಗಂಗರು, ಕದಂಬರು,ಪಲ್ಲವರು,ರಾಷ್ಟ್ರಕೂಟರು,ನೊಳಂಬರು,ಬಲ್ಲಾಳರು, ಚಾಲುಕ್ಯರು, ಹೊಯ್ಸಳರು) ಜೈನ ಧರ್ಮಕ್ಕೆ ಆಶ್ರಯ ನೀಡಿದೆ. ರ್ನಾಟಕದಲ್ಲಿ ಜೈನ ಧರ್ಮದ ಹಲವು ಸ್ಮಾರಕಗಳು ಇವೆ, ಇದರಲ್ಲಿ ಬಸದಿಗಳು,ಶಾಸನಗಳು, ಗೊಮ್ಮಟ, ಸ್ತಂಭಗಳು ಕೂಡಿವೆ. ಐತಿಹಾಸಿಕವಾಗಿ ಕರ್ನಾಟಕದೊಂದಿಗೆ ಜೈನ ಧರ್ಮದ ಸಂಬಂಧ ಕನಿಷ್ಠ ಕ್ರಿ.ಪು.6ನೇ ಶತಮಾನದಿಂದಲೇ ಇದೆ.

ಪುರಾಣ ಕಾಲದಲ್ಲಿ ಮಹಾವೀರ ಕರ್ನಾಟಕಕ್ಕೆ ಭೇಟಿ ನೀಡಿ ಹೇಮನಗರ ದೇಶದ ಕುಂತಳ (ಕರ್ನಾಟಕ) ಪ್ರದೇಶದಲ್ಲಿನ ರಾಜ ಜೀವಂಧರರಿಗೆ ಉಪದೇಶ ನೀಡಿದರೆಂದು ಹೇಳಲಾಗುತ್ತದೆ, ಬಹುಶ: ಈ ಕಾರಣದಿಂದ ಜೈನ ಧರ್ಮವು ಕರ್ನಾಟಕದಲ್ಲಿ ಹಿಂದಿನಿಂದಲೂ ಪ್ರಚಲಿತವಾಗಿದೆ. ಜೈನ ಧರ್ಮದ ಸ್ಥಳಾಂತರ ಕ್ರಿ.ಪೂ. 300 ರಿಂದ ಪ್ರಾರಂಭವಾಯಿತು. ಭದ್ರಬಾಹು ಎಂಬ ಜೈನ ಮುನಿ ತನ್ನ ಶಿಷ್ಯ ಚಂದ್ರಗುಪ್ತ ಮೌರ್ಯ(ಮೌರ್ಯ ವಂಶದ ಸ್ಥಾಪಕ) ಹಾಗೂ ಇತರರೊಂದಿಗೆ ಶ್ರವಣಬೆಳಗೊಳದ ಚಂದ್ರಗಿರಿ ಬೆಟ್ಟ ಅಥವಾ ರಿಶಿಗಿರಿಯಲ್ಲಿ ತಂಗಿದರು.

ತನ್ನ ಜೀವನ ಅಂತ್ಯಕಾಲ ಸಮೀಪಿಸುತ್ತಿರುವುದನ್ನು ಅರಿತು ತನ್ನ ಶಿಷ್ಯರಿಗೆ ಜೈನ ಧರ್ಮ ಪ್ರಚಾರ ಮಾಡಲು ಹೇಳಿ, ಚಂದ್ರಗಿರಿಯಲ್ಲೇ ಸಲ್ಲೇಖನ ತೆಗೆದುಕೊಂಡರು. ಸುಮಾರು 700 ಮುನಿಗಳು ಸಲ್ಲೇಖನ ತೆಗೆದುಕೊಂಡ ಕಾರಣ ಜೈನ ಧರ್ಮವು ಕರ್ನಾಟಕದಲ್ಲಿ ಹಬ್ಬಿತು. ಚಂದ್ರಗುಪ್ತ ಮೌರ್ಯ ಚಂದ್ರಗಿರಿಯಲ್ಲೇ ಜೀವನವನ್ನು ಮುಂದುವರೆಸಿ, ತಮ್ಮ ಗುರುಗಳ ಪಾದಚ್ಚೆಯನು ಪೂಜಿಸಲು ಆರಂಬಿಸಿದರು. ಕೊನೆಗೆ ಇವರು ಕೂಡ ಸಲ್ಲೇಖನ ವ್ರತ ಸ್ವೀಕರಿಸಿದರು. ಈ ಘಟನೆಯ ಕುರುಹಾಗಿ ಬೆಟ್ಟದ ಮೇಲೆ ಎರಡು ಸ್ಮಾರಕಗಳು ಇವೆ, ಭದ್ರಬಾಹು ಗುಹೆ ಎಂಬ ಗುಹೆ ಹಾಗೂ ಚಂದ್ರಗುಪ್ತ ಬಸದಿ.

ಕರ್ನಾಟಕದಲ್ಲಿ ಬಹಳ ಪುರಾತನವಾದ, ಜೈನ ಧರ್ಮಕ್ಕೆ ಸಂಬಂಧಪಟ್ಟ ಸ್ಮಾರಕಗಳಿವೆ. ಈ ಸ್ಮಾರಕಗಳಲ್ಲಿ, ಗುಡಿ, ಬಸ್ತಿ (ಬಸದಿ), ಗೊಮ್ಮಟ ವಿಗ್ರಹಗಳು,ಶಾಸನಗಳು ಹಾಗು ಸ್ಥಂಭ ಗಳು ಸೇರಿವೆ. ಇವುಗಳಲ್ಲಿ ಪ್ರಮುಖವಾದವು: ಶ್ರವಣಬೆಳಗೊಳದ ಚಂದ್ರಗಿರಿ, ಚಂದ್ರಗುಪ್ತ ಬಸದಿ ಹಾಗು ಚತುರ್ಮುಖ ಬಸದಿ , ಇಂದ್ರಗಿರಿಯಲ್ಲಿಯ ಒದೆಗಲ್ ಬಸದಿ, ಸಾವಿರ ಕಂಬದ ಬಸದಿ ಮೂಡಬಿದ್ರೆ. ಮೂಡಬಿದ್ರೆಯಲ್ಲಿ ಇನ್ನು 18 ಬಸದಿಗಳಿವೆ. ಚತುರ್ಮುಖ ಬಸದಿ ಕಾರ್ಕಳ ಹಾಗು ಗೇರುಸೊಪ್ಪ. ಚಂದ್ರನಾಥ ಬಸದಿ ಧರ್ಮಸ್ಥಳ. ಆದಿನಾಥ ಬಸದಿ ಬೆಳಗಾವಿ.

✦ ಜೈನ ಧರ್ಮ :
ಜೈನಧರ್ಮದ 23 ನೇ ತೀರ್ಥಂಕರ – ಪಾರ್ಶ್ವನಾಥ
ಜೈನಧರ್ಮದ 24 ನೇ ತೀರ್ಥಂಕರ – ಮಹಾವೀರ
ಪಾರ್ಶ್ವನಾಥನ ತಂದೆಯ ಹೆಸರು – ಅಶ್ವಸೇನಾ
ಜೈನ ಧರ್ಮದ ಸ್ಥಾಪಕ – ಮಹಾವೀರ
ಮಹಾವೀರ ಜನಿಸಿದ ವರ್ಷ – ಕ್ರಿ.ಪೂ. 599 ಅಥವಾ 540
ಮಹಾವೀರ ಜನಿಸಿದ ಪ್ರದೇಶ – ಪಾಟ್ನ ಸಮೀಪದ ಕುಂಡಲಿವನ ಅಥವಾ ಕುಂದಗ್ರಾಮ
ಮಹಾವೀರನ ತಂದೆಯ ಹೆಸರು – ಸಿದ್ಧಾರ್ಥ
ಸಿದ್ಧಾರ್ಥ ಈ ಜನಾಂಗದ – ಜ್ಞಾತ್ರಿಕರೆಂಬ , ಕ್ಷತ್ರಿಯ ಜನಾಂಗ
ಮಹವೀರನ ತಾಯಿಯ ಹೆಸರು – ತ್ರಿಶಲಾದೇವಿ
ಮಹಾವೀರ ವಿವಾಹವಾಗಿದ್ದು – 18 ನೇ ವಯಸ್ಸಿನಲ್ಲಿ
ಮಹಾವೀರನ ಪತ್ನಿಯ ಹೆಸರು – ಯಶೋಧರೆ
ಮಹಾವೀರ ಕೈವಲ್ಯ ಜ್ಞಾನವನ್ನು ಪಡೆದ ಗ್ರಾಮದ ಹೆಸರು – ಜ್ರುಂಬಕ
ಮಹಾವೀರನು ಜೀವನದ ಅಂತ್ಯ ದಿನಗಳನ್ನು ಈ ಪ್ರದೇಶದಲ್ಲಿ ಕಳೆದನು – ಬಿಹಾರದ ಪಾವಾ ಪುರಿ ಎಂಬಲ್ಲಿ
ಮಹಾವೀರನು ನಿರ್ವಾಣ ಹೊಂದಿದ ವರ್ಷ – ಕ್ರಿ.ಪೂ.527
ಜೈನ ಧರ್ಮದ ಮುಖ್ಯ ಗುರಿ – ಆತನ ಮುಕ್ತಿ ಮತ್ತು ಲೌಕಿಕ ಸಂಬಂಧಗಳಿಂದ ಶಾಶ್ವತ ಬಿಡುಗಡೆ

ಮಹಾವೀರನ ತತ್ವಗಳು : ಅಹಿಂಸೆ, ಸತ್ಯ ಸಂಧತೆ, ಕಳ್ಳತನ ಮಾಡದಿರುವುದು, ಸಂಪತ್ತಿನ ಬಗ್ಗೆ ವ್ಯಾಮೋಹ ಕೂಡದು, ಬ್ರಹ್ಮಚಾರ್ಯ,
ಜೈನ ಹಾಗೂ ಬೌದ್ಧ ಮತದ ಸಂಸ್ಥಾಪಕರು – ಕ್ಷತ್ರಿಯರು

✦ ಮಹಾವೀರನ ರತ್ನ ತ್ರಯಗಳು :
*ಸಮ್ಯಕ್ ದರ್ಶನ : ಸತ್ಯದಲ್ಲಿ ನಂಬಿಕೆ ಎಂದರೆ – ತೀರ್ಥಂಕರರ ಅಸ್ತಿತ್ವವನ್ನು ನಂಬುವುದು
*ಸಮ್ಯಕ್ ಜ್ಞಾನ : ಉತ್ತಮ ಜ್ಞಾನ ಎಂದರೆ – ಜೈನ ಧರ್ಮದ ತತ್ವಗಳನ್ನು ಪಾಲಿಸಿ ಜಯಿಸುವುದು
*ಸಮ್ಯಕ್ ಚಾರಿತ್ರ್ಯ : ಉತ್ತಮ ಚಾರಿತ್ರ್ಯ ಎಂದರೆ – ಮಾನವೀಯ ಮೌಲ್ಯಗಳನ್ನಾಧರಿಸಿ ನೀತಿಯುತ ಬಾಳ್ವೆ ನಡೆಸುವುದು
✦ ಜೈನರು ಅನುಸರಿಸುತ್ತಿದ್ದ ಉಪವಾಸ ಪದ್ದತಿ – ಸಲ್ಲೇಖನ ವ್ರತ
✦ ಜೈನ ಧರ್ಮ ಮೊದಲು ಆರಂಭವಾದುದು – ವೈಶಾಲಿ ಹಾಗೂ ಮಗಧ ದೇಶದಲ್ಲ
✦ ಜೈನ ಧರ್ಮದ ಶಾಖೆಗಳು : ಶ್ವೇತಾಂಬರರು, ದಿಗಂಬರರು,
✦ ಶ್ವೇತಾಂಬರರು : ಇವರು ಪಾರ್ಶ್ವನಾಥನ ಅನುಯಾಯಿಗಳು, ಬಿಳಿಯ ವಸ್ತ್ರವನ್ನು ಧರಿಸುವವರು
✦ ದಿಗಂಬರರು : ಇವರು ಮಹಾವೀರನ ಅನುಯಾಯಿಗಳು, ಇವರು ನಗ್ನರಾಗಿರುತ್ತಾರೆ, ಇವರಿಗೆ ದಿಕ್ಕೆ ಅಂಬರ, ಉಪವಾಸದ ಮೂಲಕ ದೇಹ ದಂಡಿಸುವುದು
✦ ಚಂದ್ರಗುಪ್ತ ಮೌರ್ಯರೊಡನೆ ಶ್ರವಣಬೆಳಗೋಳಕ್ಕೆ ಬಂದ ಜೈನ ಮುನಿಯ ಹೆಸರು – ಭದ್ರಬಾಹು
✦ ದಕ್ಷಿಣ ಭಾರತದಲ್ಲಿ ಜೈನ ಧರ್ಮವನ್ನು ಪ್ರಚಾರ ಮಾಡಿದ ಜೈನ ಮುನಿ – ಭದ್ರಬಾಹು
✦ ಜೈನ ಧರ್ಮವನ್ನು ರಕ್ಷಿಸಿ ಬೆಳೆಸಿದ ರಾಜ ಮನೆತನಗಳು – ಪಲ್ಲವರು ,ಗಂಗರು ,ರಾಷ್ಟ್ರಕೂಟರು
✦ ಜೈನಧರ್ಮದ ಗ್ರಂಥಗಳನ್ನು ಈ ಹೆಸರಿನಿಂದ ಕರೆಯುವರು – ದ್ವಾದಶ ಅಂಗಗಳು
✦ ಜೈನ ಧರ್ಮದ ಪವಿತ್ರ ಗ್ರಂಥಗಳು : ಆಚಾರಂಗ ಮತ್ತು ಉಪಾಸಾಂಗ, ಧವಳ ಮತ್ತು ಜಯಧವಳ

✦ ಇತರೆ ಪ್ರಮುಖ ಅಂಶಗಳು :
ವೈಶಾಲಿ ನಗರದ ಇಂದಿನ ಹೆಸರು – ವೇಸಾಡ್
ಜೈನರ ಮೊದಲ ತೀರ್ಥಂಕರ – ಆಧಿನಾಥ ಅಥವಾ ವೃಷಭನಾಥ
ಜಿನ ಪದದ ಅರ್ಥ – ಇಂದ್ರಿಯಗಳನ್ನು ಪೂರ್ಣ ನಿಗ್ರಹಿಸಿದವನು ಅಥವಾ ಜಯಿಸಿದವನು
ಜೈನ ಧರ್ಮದ ಕೊನೆಯ ತೀರ್ಥಂಕರ – ಮಹಾವೀರ
ಕುಂಡಲಿವನದ ಇಂದಿನ ಹೆಸರು – ಬಸುಕುಂದ
ಮಹಾವೀರನ ಜನನವಾದದ್ದು – 599
ಮಹಾವೀರನು ಸನ್ಯಾಸಿಯಾದುದ್ದು – ತನ್ನ 30 ನೇ ವಯಸ್ಸಿನಲ್ಲಿ
ಮಹಾವೀರನ ಪ್ರಥಮ ಗಮಧರ ಅಥವಾ ಶಿಷ್ಯ – ಇಂದ್ರಭೂತಿ
ಜೈನ ಧರ್ಮ ಗ್ರಂಥಗಳು ಈ ಭಾಷೆಯಲ್ಲಿದೆ – ಪ್ರಾಕೃತ
ಬಿಂಬಸಾರ ಈ ವಂಶದವರು – ಹರ್ಯಾಂಕ
ಬಿಂಬಸಾರ ಇನ್ನೋಂದು ಹೆಸರು – ಶ್ರೇಣಿಕ
ಬಿಂಬಸಾರನ ಪುತ್ರನ ಹೆಸರು – ಅಜಾತಶತೃ
ಮಹಾವೀರನು ನಿರ್ವಾಣ ಹೊಂದಿದ್ದು ಈ ವಯಸ್ಸಿನಲ್ಲಿ – 72
ಮಹಾವೀರನು ನಿರ್ವಾಣ ಹೊಂದಿದ್ದ ವರ್ಷ – ಕ್ರಿ.ಪೂ.527
ಜೈನರ ಕರ್ನಾಟಕದ ಪ್ರಾಚೀನ ಕೇಂದ್ರಗಳು – ಕೊಪ್ಪಳ ಹಾಗೂ ಶ್ರವಣಬೆಳಗೋಳ
ಬಸದಿಗಳೆಂದರೆ – ಜೈನ ಸನ್ಯಾಸಿಗಳು ವಾಸಿಸುವ ವಸತಿ ಗೃಹ
ಜೈನರ ಪ್ರಮುಖ ಬಸದಿಗಳು – ಒರಿಸ್ಸಾದ ಹಾಥಿಗುಂಪಾ ,ಕರ್ನಾಟಕದ ಬಾದಾಮಿ
ಜೈನರ ಯಕ್ಷಿ ಜನಪ್ರಿಯ ದೇವತೆ – ಪದ್ಮಾವತಿ ಯಕ್ಷಿ
ತೀರ್ಥಂಕರರು ಎಂದರೇ – ಮಾರ್ಗದರ್ಶಕರು ಎಂದರ್ಥ ಅಥವಾ ಭವ ಸಾಗರವನ್ನು ದಾಟಬಲ್ಲ ಧರ್ಮಗುರು ಮಹಾವೀರನ ಮೊದಲ ಹೆಸರು – ವರ್ದಮಾನ
ತ್ರಿಶಾಲಾದೇವಿ ಈ ವಂಶದ ರಾಜ ಕುಮಾರಿ – ವೈಶಾಲಿಯ ಲಿಚ್ಚವಿ ವಂಶ
ಮಹಾವೀರನ ಹೆಣ್ಣು ಮಗುವಿನ ಹೆಸರು – ಅನೋಜ್ಯ ಅಥವಾ ಪ್ರಿಯದರ್ಶನ
ವರ್ಧಮಾನನು ಸನ್ಯಾಸತ್ವ ಸ್ವೀಕರಿಸಿದ ಘಟನೆಯನ್ನು ಈ ಹೆಸರಿನಿಂದ ಕರೆಯುವರು – ಮಹಾ ಪರಿತ್ಯಾಗ
ಕೇವಲನ್ , ನಿರ್ಗ್ರಂಥ ಎಂದು ಕರೆಸಿಕೊಂಡವನು – ಮಹಾವೀರ
ಕೇವಲಿನ್ ಎಂದರೆ – ಮಹಾಜ್ಞಾನಿ
ನಿರ್ಗ್ರಂಥ ಎಂದರೆ – ಬಂಧಮುಕ್ತ ಎಂದರ್ಥ
ಮಹಾವೀರನ ಅನುಯಾಯಿಗಳನ್ನು ಬೌದ್ಧ ಕೃತಿಗಳಲ್ಲಿ ಈ ರೀತಿಯಾಗಿ ಸಂಭೋಧಿಸಲಾಗಿದೆ – ನಿರ್ಗ್ರಂಥರು
ಕರ್ಮ ಸಿದ್ಧಾಂತದ ಪ್ರವರ್ತಕ – ಮಹಾವೀರ
ಮಹಾವೀರನು ಲೌಕಿಕರಿಗೆ ನೀಡಿದ ಕೆಲ ರಿಯಾಯಿತಿಗಳು : ಆಕಸ್ಮಿಕ ಹಿಂಸೆ, ಔದ್ಯೋಗಿಕ ಹಿಂಸೆ, ರಕ್ಷಣಾ ಸಂಬಂಧಿ ಹಿಂಸೆ, ಉದ್ದೇಶ ಪೂರ್ವಕ ಹಿಂಸೆ
ಮೋಕ್ಷ ಸಾಧನೆಯ ಮಾರ್ಗಗಳು, ತಪಶ್ವರ್ಯ, ದೇಹದಂಡನೆ , ಪ್ರಾಯೋಪವೇಶನ ( ಸಲ್ಲೇಖನ )
ಮೊದಲನೇ ಜೈನ ಸಮ್ಮೇಳನ ನಡೆದ ವರ್ಷ – ಕ್ರಿ.ಪೂ -3 ನೇ ಶತಮಾನ
ಮೊದಲನೆ ಜೈನ ಸಮ್ಮೇಳನ ಈ ಪ್ರದೇಶದಲ್ಲಿ ನಡೆಯಿತು – ಪಾಟಲಿಪುತ್ರ
ಮೊದಲ ಜೈನ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದವರು – ಸ್ಥೂಲಭದ್ರ
ಕ್ರಿ.ಪೂ.5 ನೇ ಶತಮಾನದಲ್ಲಿ – ವಲ್ಲಭಿ ಸಮ್ಮೇಳನ ಗುಜರಾತ್ ನಲ್ಲಿ ದೇವರ್ದಿ ಕಶ್ಮಶರ್ಮನ ಅಧ್ಯಕ್ಷತೆಯಲ್ಲಿ ನಡೆಯಿತು
ಗಣಧರರ ಗುರು ಪರಂಪರೆಯನ್ನು ಆರಂಭಿಸಿದವರು – ಸುಧರ್ಮ
ವೃಷಭನಾಥನ ಬಗೆಗೆ ಪ್ರಸ್ತಾಪವಿರುವ ಹಿಂದೂ ಗ್ರಂಥಗಳು – ವಿಷ್ಣು ಪುರಾಣ ಹಾಗೂ ಭಗವತ್ ಪುರಾಣ
ತ್ರಿರತ್ನಗಳನ್ನು ಪ್ರಚುರಪಡಿಸಿವರು – ಮಹಾವೀರ
ಕರ್ನಾಟಕದಲ್ಲಿ ಜೈನರ ಪವಿತ್ರ ಯಾತ್ರ ಸ್ಥಳ – ಹಾಸನ ಜಿಲ್ಲೆಯ ಶ್ರವಣಬೆಳಗೋಳ
ಋಗ್ವೇದ ದಲ್ಲಿ ಈ ತೀರ್ಥಂಕರನ ಕುರಿತು ಪ್ರಸ್ತಾಪವಿದೆ – ವೃಷಭನಾಥ
ಜೈನ ತತ್ವಕ್ಕಿರುವ ಮತ್ತೋಂದು ಹೆಸರು – ಸ್ಮಾರವಾದ
23 ನೇ ತೀರ್ಥಂಕರ ಪಾರ್ಶ್ವನಾಥನು ಈ ವಂಶಕ್ಕೆ ಸೇರಿದವನು – ಕಾಶಿ
ಪಂಚವ್ರತಗಳನ್ನು ಗೃಹಸ್ಥರು ಪಾಲಿಸುವುದನ್ನು ಈ ಹೆಸರಿನಿಂದ ಕರೆಯುವರು – ಅನುವ್ರತಗಳು
ಜೈನಧರ್ಮವನ್ನು ರಾಜ್ಯ ಧರ್ಮವನ್ನಾಗಿ ಸ್ವೀಕರಿಸಿದ ಲಿಚ್ಚವಿ ರಾಜ್ಯದ ಯುವ ರಾಜನ ಹೆಸರು – ಅಭಯ
ಜೈನ ಧರ್ಮದಲ್ಲಿ ಪೋಸಧ ಎಂದರೆ – ಪೌರ್ಣಮಿಯ ದಿನದಂದು ಜೈನರು ಉಪವಾಸ ಮಾಡುವುದು
ಭದ್ರಬಾಹು ಜೈನ ವಿಹಾರಗಳಿಗೆ – 6 ನೇ ಖಲೀಫ
ಪಾರ್ಶ್ವನಾಥರು ದೈವಾಧೀನವಾದ ಪ್ರದೇಶ – ಬಂಗಾಳ
ಮಹಾವೀರನು ತಪಸ್ಸು ಮಾಡಿದ ಆಲದ ಮರ ಜೃಂಬಿಕಾ ವೃಕ್ಷ ಇರುವ ಸ್ಥಳ – ರುಜುಪಾಲಿಕ
ಜೈನ ಧರ್ಮದ ಮಹಾನ್ ಗುರು – ಸುಧಾರ್ಯ
ವೃಷಭನಾಥನ ಮಗನ ಹೆಸರು – ಭರತ
ಜೈನ ಧರ್ಮದ ಅವನತಿಗೆ ಕಾರಣಗಳು : ಜೈನರ ಅನುಯಾಯಿಗಳಲ್ಲಿ ಧರ್ಮದ ಪ್ರಚಾರದ ಆಸಕ್ತಿ ಕಡಿಮೆಯಾದುದು, ರಾಜರ ಪ್ರೋತ್ಸಹ ಕ್ರಮೇಣ ಕಡಿಮೆಯಾದುದು, ಜೈನ ಧರ್ಮದಲ್ಲಿ ಪಂಥದ ರೂಪಣಿ ಹಾಗೂ ಬಿಕ್ಕಟ್ಟು ಜಾತಿ ಪದ್ದತಿ ಪುನಃ ತಲೆ ಎತ್ತಿದ್ದು , ಹಿಂದೂಗಳಲ್ಲಿ ಕಾಣಿಸಿಕೊಂಡ ಸುಧಾರಣಾ ಚಳುವಳಿ, ಆಚರಣಿಗೆ ನಿಲುಕದ ಮಹಾವೀರನ ಬೋಧನೆಗಳು,
ಪ್ರಸಿದ್ದ ಗೊಮ್ಮಟೇಶ್ವರ ( ಶ್ರವಣಬೆಳಗೋಳ ) ನಿರ್ಮಾತೃ – ಚಾವುಂಡರಾಯ
ಜೈನರ ಚಿಹ್ನೆ – ಸ್ವಸ್ತಿಕ್ ಮತ್ತು ಅಭಯ ಹಸ್ತ
ಜಾನರ ಪ್ರಮುಖ ಪೂಜಾಸ್ಥಳ – ಬಸದಿ
ಪಾರ್ಶ್ವನಾಥನ ತಂದೆ ತಾಯಿ – ಅಶ್ವಸೇನಾ ಮತ್ತು ಪ್ರಭಾವತಿ
ತ್ರಿಶಾಲಾ ದೇವಿಯ ಅಣ್ಣನ ಹೆಸರು – ಚೇತಕ
ಜೃಂಬಿಕ ಗ್ರಾಮ ಈ ನದಿಯ ದಂಡೆಯಲ್ಲಿದೆ – ಋಜುಪಾಲಕ ನದಿ
ಪ್ರಸಿದ್ದ ಮೌಂಟ್ ಅಬು ದೇವಾಲಯದ ನಿರ್ಮಾತೃ – ಗುಜರಾತಿನ ರಾಜಕುಮಾರ ಕುಮಾರ ಪಾಲ
1000 ಕಂಬಗಳಿರುವ ಜೈನ ಬಸದಿ ಇರುವ ಕರ್ನಾಟಕ ಸ್ಥಳ – ಮೂಡಬಿದ್ರೆ
ಜೈನರ ಮೆಕ್ಕಾ ಎಂದು ಕರೆಯಲ್ಪಡುವ ಸ್ಥಳ – ಮೂಡಬಿದ್ರೆ
ಜೈನರ ಕಾಶಿ ಎಂದು ಕರೆಯಲ್ಪಡುವ ಸ್ಥಳ – ಶ್ರವಣಬೆಳಗೋಳ
ಮಗಧದ ಇಂದಿನ ಹೆಸರು – ಬಿಹಾರ

Leave a Reply

Your email address will not be published. Required fields are marked *

error: Content Copyright protected !!