AwardsCurrent AffairsSpardha Times

ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ‘ಭಾರತ ರತ್ನ’

Share With Friends

ಭಾರತೀಯ ಜನತಾ ಪಕ್ಷದ ಧೀಮಂತ ನಾಯಕ ಮತ್ತು ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿ ನೀಡಲಾಗಿದೆ. ಇಲ್ಲಿಯವರೆಗೆ ಕೇಂದ್ರ ಸರ್ಕಾರವು ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸಿದೆ. ಇದೀಗ ಈ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಅಡ್ವಾಣಿ ಅವರ ಹೆಸರನ್ನು ಆಯ್ಕೆ ಮಾಡಲಾಗಿದೆ. ಬಿಜೆಪಿಯ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರಿಗೂ ಈ ಪ್ರಶಸ್ತಿ ನೀಡಲಾಗಿದೆ. ಅತ್ಯುತ್ತಮ ಸಂಸದೀಯ ಪ್ರಶಸ್ತಿ ಪಡೆದವರಲ್ಲಿ ಅಡ್ವಾಣಿ ಕೂಡ ಒಬ್ಬರು. ಗುಜರಾತ್‌ನ ರಾಜಧಾನಿ ಗಾಂಧಿನಗರದ ಲೋಕಸಭಾ ಕ್ಷೇತ್ರದಿಂದ ಆರು ಬಾರಿ ಗೆದ್ದಿದ್ದಾರೆ. 1991ರಲ್ಲಿ ಮೊದಲ ಬಾರಿಗೆ ಇಲ್ಲಿಂದ ಗೆದ್ದಿದ್ದರು. ಆ ಬಳಿಕ 1998ರಿಂದ 2014ರವರೆಗೆ ಲೋಕಸಭೆಗೆ ಸೋಲದೇ ಆಯ್ಕೆಯಾಗಿದ್ದರು. ಸದ್ಯ ಅವರು ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದಿದ್ದಾರೆ.

ಎಲ್.ಕೆ.ಅಡ್ವಾಣಿ ಅವರ ರಾಜಕೀಯ ಪಯಣ
ಭಾರತೀಯ ಜನತಾ ಪಕ್ಷದ (ಬಿಜೆಪಿ) ಹಿರಿಯ ನಾಯಕ, 96 ವರ್ಷದ ಎಲ್.ಕೆ ಅಡ್ವಾಣಿ ಎಲ್.ಕೆ.ಅಡ್ವಾಣಿ ಅವರು ಭಾರತದಲ್ಲಿ ಸುದೀರ್ಘ ಮತ್ತು ಪ್ರಭಾವಶಾಲಿ ರಾಜಕೀಯ ವೃತ್ತಿಜೀವನವನ್ನು ಹೊಂದಿದ್ದಾರೆ. ರಾಜಕೀಯದಲ್ಲಿ ಎಲ್‌ಕೆ ಅಡ್ವಾಣಿ ಅವರು ಸಾಗಿ ಬಂದ ಹಾದಿ ಇಲ್ಲಿದೆ.

✦ಲಾಲ್‌ ಕೃಷ್ಣ ಅಡ್ವಾಣಿ ಅವರು ಜನಿಸಿದ್ದು, ನವೆಂಬರ್ 8, 1927ರಲ್ಲಿ. ಅವಿಭಜಿತ ಭಾರತದ ಕರಾಚಿಯಲ್ಲಿ ಸಿಂಧಿ ಕುಟುಂಬದಲ್ಲಿ ಜನಿಸಿದರು. ಕರಾಚಿಯಲ್ಲಿ ಸೆಂಟ್ ಪ್ಯಾಟ್ರಿಕ್ಸ್‌ ಶಾಲೆಯಲ್ಲಿ ವಿಧ್ಯಾಭ್ಯಾಸ ಮಾಡಿದರು. ಇವರಲ್ಲಿದ್ದ ದೇಶಭಕ್ತಿಯಿಂದ 1941ರ ಅವಧಿಯಲ್ಲಿ ಇವರ ವಯಸ್ಸು 14 ಇದ್ದಾಗಲೇ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (ಆರ್‌ಎಸ್‌ಎಸ್) ಸೇರುವಂತೆ ಮಾಡಿತ್ತು.

✦ದೇಶದ ವಿಭಜನೆಯ ಸಮಯದಲ್ಲಿ ಅವರು ದೆಹಲಿಗೆ ವಲಸೆ ಹೋಗಬೇಕಾಯಿತು. ಇದೇ ವೇಳೆ ಎಲ್.ಕೆ ಅಡ್ವಾಣಿ ಅವರು ರಾಜಸ್ಥಾನದಲ್ಲಿ ಆರ್‌ಎಸ್‌ಎಸ್ ಪ್ರಚಾರಕರಾದರು. ಮೃದುಭಾಷಿ ಮತ್ತು ಸೌಮ್ಯ ಸ್ವಭಾವದ ಅಡ್ವಾಣಿ ಜನ್ಮಭೂಮಿ ಚಳವಳಿಯಲ್ಲಿ ಕೈಗೊಂಡರು.

✦ತಮ್ಮ ಆರಂಭಿಕ ರಾಜಕೀಯ ಜೀವನದಲ್ಲಿ, ಅಡ್ವಾಣಿ 1951 ರಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ ರಚಿಸಿದ ಬಿಜೆಪಿಯ ಪೂರ್ವವರ್ತಿ ಜನಸಂಘದ ಭಾಗವಾದರು. ಅವರನ್ನು ಪಕ್ಷದ ರಾಜಸ್ಥಾನ ಘಟಕದ ಕಾರ್ಯದರ್ಶಿಯಾಗಿ ನೇಮಿಸಲಾಯಿತು. 1957 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಹಾಯ ಮಾಡಲು ಅವರನ್ನು ದೆಹಲಿಗೆ ಸ್ಥಳಾಂತರಿಸಲಾಯಿತು.

✦ರಾಜಕೀಯದಲ್ಲಿ ಗುರುತಿಸಿಕೊಳ್ಳುತ್ತಾ ಹೋದ ಎಲ್.ಕೆ ಅಡ್ವಾಣಿ ಅವರು 1970ರಲ್ಲಿ ರಾಜ್ಯಸಭೆ ಸದಸ್ಯರಾದರು. 1989ರವರೆಗೆ ತಮ್ಮ ಸ್ಥಾನವನ್ನು, ಕರ್ತವ್ಯವನ್ನು ನಿಭಾಯಿಸಿದರು. ಇದರ ನಂತರ ಡಿಸೆಂಬರ್ 1972 ರಲ್ಲಿ, ಅಡ್ವಾಣಿ ಅವರು ಭಾರತೀಯ ಜನಸಂಘದ ಅಧ್ಯಕ್ಷರಾಗಿ ಆಯ್ಕೆಯಾದರು.

✦1980ರಲ್ಲಿ ರಾಮ ಜನ್ಮಭೂಮಿ ಚಳವಳಿಯನ್ನು ಮತ್ತಷ್ಟು ತೀವ್ರಗೊಳಿಸುತ್ತಾ, ಎಲ್ಲೆಡೆ ಕೇಸರಿಮಯ ಮಾಡುತ್ತಾ, ರಾಜಕೀಯ ರಂಗದಲ್ಲೂ ಮುನ್ನಡೆಸುತ್ತಾ ಹೋದರು.

✦1990ರಿಂದ ವಾಜಪೇಯಿ ಅವರ ಜೊತೆ ಸೇರಿ ಬಿಜೆಪಿಯನ್ನು ಬಲಪಡಿಸುತ್ತಾ, ಪಕ್ಷದ ಅಭಿವೃದ್ಧಿಗೆ ಬೆನ್ನೆಲುಬಾದರು. 1980 ಮತ್ತು 1990 ರ ದಶಕದಲ್ಲಿ ಬಿಜೆಪಿಯನ್ನು ರಾಷ್ಟ್ರೀಯ ರಾಜಕೀಯ ಶಕ್ತಿಯಾಗಿ ನಿರ್ಮಿಸುವಲ್ಲಿ ಸಫಲರಾದರು. 1984 ರಲ್ಲಿ 2 ಸ್ಥಾನಗಳಿಂದ 1989 ರಲ್ಲಿ 86 ಸ್ಥಾನಗಳಿಗೆ ಬಿಜೆಪಿ ಪುಟಿದೇಳಿತು.

✦1980 ರಲ್ಲಿ ಭಾರತೀಯ ಜನತಾ ಪಕ್ಷ ಪ್ರಾರಂಭವಾದಾಗಿನಿಂದ ಎಲ್.ಕೆ ಅಡ್ವಾಣಿ ಅವರು ಅಧ್ಯಕ್ಷರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದಾರೆ. 10 ಬಾರಿ ಸಂಸದರಾಗಿದ್ದ ಅಡ್ವಾಣಿ ಅವರು ಗೃಹ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 2002 ರಿಂದ 2004 ರವರೆಗೆ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸಂಪುಟದಲ್ಲಿ ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಬಿಜೆಪಿಯ ವಿಕಾಸದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾರೆ.

✦2009 ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿಕೊಂಡಿದ್ದ ಎಲ್.ಕೆ ಅಡ್ವಾಣಿ ಅವರು, ಆ ಚುನಾವಣೆಯ ಸೋಲು ಅವರ ರಾಜಕೀಯ ವೃತ್ತಿ ಜೀವನದ ಮೇಲೆ ಪರಿಣಾಮ ಬೀರಿತು. 2009 ರ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ವಿರುದ್ಧ ಬಿಜೆಪಿ ಭಾರಿ ಸೋಲನ್ನು ಅನುಭವಿಸಿತು. ಇದರಿಂದ ಪಕ್ಷದಲ್ಲಿ ಅಡ್ವಾಣಿ ಅವರ ಮೇಲೆ ಪರಿಣಾಮ ಬೀರುವಂತೆ ಆಯಿತು.

✦2014 ರಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಚುನಾವಣೆಯಲ್ಲಿ ಗೆದ್ದ ನಂತರ ಎಲ್.ಕೆ ಅಡ್ವಾಣಿ ಅವರನ್ನು ‘ಮಾರ್ಗದರ್ಶಕ ಮಂಡಲ್’ ಸದಸ್ಯರನ್ನಾಗಿ ಮಾಡಲಾಯಿತು.

✦ರಾಮ ಮಂದಿರ ಹೋರಾಟದ ರೂವಾರಿ ಎಲ್.ಕೆ ಅಡ್ವಾಣಿಗೆ ಕಳೆದ ತಿಂಗಳು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಿಂದ ದೊಡ್ಡ ಜಯ ಸಿಕ್ಕಿತ್ತು. ಅಯೋಧ್ಯೆ ರಾಮಮಂದಿರ ಉದ್ಘಾಟನೆಗೊಂಡ ಬೆನ್ನಲ್ಲೇ ಬಿಜೆಪಿಯ ಭೀಷ್ಮ ಎಂದೇ ಖ್ಯಾತಿ ಪಡೆದಿರೋ ಎಲ್.ಕೆ ಅಡ್ವಾಣಿ ಅವರಿಗೆ ಭಾರತ ರತ್ನ ಗೌರವ ಘೋಷಣೆಯಾಗಿದೆ.

✦ ಆರ್‌ಎಸ್‌ಎಸ್‌ನಿಂದ ರಾಜಕಾರಣಕ್ಕೆ
ಭಾರತ ರತ್ನ ಪ್ರಶಸ್ತಿಗೆ ಭಾಜನರಾಗಿರುವ ಬಿಜೆಪಿಯ ಲಾಲಕೃಷ್ಣ ಅಡ್ವಾಣಿ ಅವರು 1927 ನ. 8 ರಂದು ಅವಿಭಜಿತ ಭಾರತದ ಸಿಂಧ್ ಪ್ರಾಂತ್ಯದ ಗೊರೇಗಾಂವ್‌ನಲ್ಲಿ ಜನಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಕ ರಾಜಕಾರಣ ಪ್ರವೇಶಿಸಿದ ಲಾಲಕೃಷ್ಣ ಅಡ್ವಾಣಿ ಅವರು ಜನಸಂಘ ಸ್ಥಾಪನೆಯಲ್ಲಿ ಪ್ರಮುಖಪಾತ್ರ ವಹಿಸಿದ್ದರು. ದೇಶದಲ್ಲಿ ಬಿಜೆಪಿ ಕಟ್ಟುವಲ್ಲಿ ಅಡ್ವಾಣಿ ಅವರ ಶ್ರಮ ಬಹಳ ದೊಡ್ಡದು. ಅವರು ಕೇಂದ್ರ ಸಚಿವರಾಗಿ ಹಲವು ಖಾತೆಗಳನ್ನು ನಿಭಾಯಿಸಿ ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. 2002 ರಿಂದ 2004ರವರೆಗೆ ಉಪಪ್ರಧಾನಿಯಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಕಾನೂನು ಪದವೀಧದರಾದ ಲಾಲಕೃಷ್ಣ .ಅಡ್ವಾಣಿ ಅವರು ತುರ್ತು ಪರಿಸ್ಥಿತಿಯ ಸಂದರ್ಭದಲ್ಲೇ ಬೆಂಗಳೂರಿನಲ್ಲೇ ಜೈಲುವಾಸವನ್ನು ಅನುಭವಿಸಿದ್ದರು. ಆಗಿನ ಜನಸಂಘ ಈಗಿನ ಭಾರತೀಯ ಜನತಾಪಾರ್ಟಿಯಲ್ಲಿ ಸಾಕಷ್ಟು ಸೇವೆ ಸಲ್ಲಿಸಿದ್ದ ಲಾಲಕೃಷ್ಣ ಎಲ್.ಕೆ.ಅಡ್ವಾಣಿ ಅವರು ತಮ್ಮ ರಥಯಾತ್ರೆಯ ಮೂಲಕ ದೇಶದಲ್ಲಿ ಬಿಜೆಪಿ ಕಟ್ಟಿ ಬೆಳೆಸುವಲ್ಲಿ ಪ್ರಮುಖಪಾತ್ರ ವಹಿಸಿದ್ದರು.

ಇದುವರೆಗೆ 50 ಸಾಧಕರಿಗೆ ಭಾರತರತ್ನ :
ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತರತ್ನವನ್ನು ಇದುವರೆಗೆ 50 ಸಾಧಕರಿಗೆ ನೀಡಲಾಗಿದೆ. ಈ ಪೈಕಿ, 17 ಸಾಧಕರಿಗೆ ಮರಣೋತ್ತರವಾಗಿ ನೀಡಲಾಗಿದೆ. 1954 ರಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಯು ಜನಾಂಗ, ಉದ್ಯೋಗ, ಸ್ಥಾನ ಅಥವಾ ಲಿಂಗವನ್ನು ಲೆಕ್ಕಿಸದೆ ಸಾಧಕರನ್ನು ಗೌರವಿಸುವ ಪುರಸ್ಕಾರವಾಗಿದೆ. ಯಾವುದೇ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ತೋರಿದವರಿಗೆ ಈ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ. ಪ್ರಧಾನ ಮಂತ್ರಿಯವರು ಇಂತಹ ಸಾಧಕರ ಹೆಸರನ್ನು ಈ ಪುರಸ್ಕಾರಕ್ಕಾಗಿ ರಾಷ್ಟ್ರಪತಿಯವರಿಗೆ ಕಳುಹಿಸುತ್ತಾರೆ. ಅವರು ಅದನ್ನು ಅಂಗೀಕರಿಸಿ ಅಂತಿಮಗೊಳಿಸುತ್ತಾರೆ. ಪ್ರಶಸ್ತಿ ಪುರಸ್ಕೃತರಿಗೆ ರಾಷ್ಟ್ರಪತಿಗಳು ಸಹಿ ಮಾಡಿದ ಸನದ್ (ಪ್ರಮಾಣಪತ್ರ) ಮತ್ತು ಪದಕವನ್ನು ನೀಡಲಾಗುತ್ತದೆ. ಗೃಹ ಸಚಿವಾಲಯ ಪ್ರಕಾರ, ಭಾರತ ರತ್ನ ಪ್ರಶಸ್ತಿಯಲ್ಲಿ ನಗದು ಹಣ ಇರುವುದಿಲ್ಲ. ಇದಕ್ಕೆ ಔಪಚಾರಿಕ ಅರ್ಜಿ ಸಲ್ಲಿಸುವಿಕೆ ಇರುವುದಿಲ್ಲ. ವಾರ್ಷಿಕವಾಗಿ ಮೂವರಿಗೆ ಭಾರತ ರತ್ನ ಪ್ರಶಸ್ತಿ ನೀಡಲು ಶಿಫಾರಸು ಮಾಡಬಹುದಾಗಿದೆ.

ರಾಜ್ಯವಾರು, ಕ್ಷೇತ್ರವಾರು ಭಾರತ ರತ್ನ ಪ್ರಶಸ್ತಿ ವಿಜೇತರ ಸಂಖ್ಯೆ :
ಭಾರತ ರತ್ನ ಪ್ರಶಸ್ತಿ ಗರಿಷ್ಠ ಸಾರ್ವಜನಿಕ ವ್ಯವಹಾರ ಕ್ಷೇತ್ರದ 27 ಸಾಧಕರಿಗೆ ಪ್ರದಾನ ಮಾಡಲಾಗಿದೆ. ಇದೇ ರೀತಿ, ವಿಜ್ಞಾನ ಮತ್ತು ಇಂಜಿನಿಯರಿಂಗ್ 8, ಕಲಾಕ್ಷೇತ್ರದ 7, ಸಮಾಜ ಕಾರ್ಯ 6, ಶಿಕ್ಷಣ ಮತ್ತು ಸಾಹಿತ್ಯ 2, ಕ್ರೀಡೆ -1, ವಾಣಿಜ್ಯ ಮತ್ತು ಕೈಗಾರಿಕೆ -1, ನಾಗರಿಕ ಸೇವೆ ಕ್ಷೇತ್ರದ ಒಬ್ಬರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಮಹಾರಾಷ್ಟ್ರ 9,ಉತ್ತರ ಪ್ರದೇಶ 8,ದೆಹಲಿ 5,ಪಶ್ಚಿಮ ಬಂಗಾಳ 4,ಗುಜರಾತ್ 3,ಬಿಹಾರ, ಅಸ್ಸಾಂ, ಕರ್ನಾಟಕ ತಲಾ 2,ಒಡಿಶಾ, ತೆಲಂಗಾಣದ ತಲಾ ಒಬ್ಬರಿಗೆ ಭಾರತ ರತ್ನ ಪ್ರಶಸ್ತಿಗೆ ಭಾಜನರಾದರು.
ದಕ್ಷಿಣ ಆಫ್ರಿಕಾ, ಬ್ರಿಟನ್, ಅಮೆರಿಕ, ಪಾಕಿಸ್ತಾನ ತಲಾ ಒಬ್ಬರು ಸಾಧಕರು ಭಾರತ ರತ್ನಕ್ಕೆ ಭಾಜನರಾಗಿದ್ದಾರೆ.

ಇದುವರೆಗಿನ ಭಾರತ ರತ್ನ ಪ್ರಶಸ್ತಿ ಪುರಸ್ಕೃತರು :
1954
1) ಚಕ್ರವರ್ತಿ ರಾಜಗೋಪಾಲಾಚಾರಿ (ರಾಜಕಾರಣಿ, ಬರಹಗಾರ, ವಕೀಲ ಮತ್ತು ಸ್ವಾತಂತ್ರ್ಯ ಕಾರ್ಯಕರ್ತ)
2) ಡಾ.ಸರ್ವಪಲ್ಲಿ ರಾಧಾಕೃಷ್ಣನ್ (ತತ್ವಜ್ಞಾನಿ, ರಾಜಕಾರಣಿ ಮತ್ತು ಭಾರತದ ಮಾಜಿ ರಾಷ್ಟ್ರಪತಿ)
3) ಚಂದ್ರಶೇಖರ ವೆಂಕಟ ರಾಮನ್ (ಭೌತಶಾಸ್ತ್ರಜ್ಞ)

1955
4) ಭಗವಾನ್ ದಾಸ್ (ಸ್ವಾತಂತ್ರ್ಯ ಹೋರಾಟಗಾರ, ತತ್ವಜ್ಞಾನಿ ಮತ್ತು ಶಿಕ್ಷಣ ತಜ್ಞ)
5) ಮೋಕ್ಷಗುಂಡಂ ವಿಶ್ವೇಶ್ವರಯ್ಯ (ಸಿವಿಲ್ ಇಂಜಿನಿಯರ್, ರಾಜನೀತಿಜ್ಞ ಮತ್ತು ಮೈಸೂರಿನ ದಿವಾನ)
6) ಜವಾಹರಲಾಲ್ ನೆಹರು (ಸ್ವಾತಂತ್ರ್ಯ ಹೋರಾಟಗಾರ, ಲೇಖಕ ಮತ್ತು ಭಾರತದ ಮಾಜಿ ಪ್ರಧಾನಿ)

1957
7) ಗೋವಿಂದ ವಲ್ಲಭ ಪಂತ್ (ಸ್ವಾತಂತ್ರ್ಯ ಹೋರಾಟಗಾರ)

1958
8) ಧೋಂಡೋ ಕೇಶವ್ ಕರ್ವೆ (ಸಮಾಜ ಸುಧಾರಕ ಮತ್ತು ಶಿಕ್ಷಣತಜ್ಞ)

1961
9) ಬಿಧಾನ್ ಚಂದ್ರ ರಾಯ್ (ವೈದ್ಯ, ರಾಜಕೀಯ ನಾಯಕ, ಲೋಕೋಪಕಾರಿ, ಶಿಕ್ಷಣ ತಜ್ಞ ಮತ್ತು ಸಮಾಜ ಸೇವಕ)
10) ಪುರುಷೋತ್ತಮ್ ದಾಸ್ ಟಂಡನ್ (ಸ್ವಾತಂತ್ರ್ಯ ಹೋರಾಟಗಾರ)

1962
11) ಬಾಬು ರಾಜೇಂದ್ರ ಪ್ರಸಾದ್ (ಸ್ವಾತಂತ್ರ್ಯ ಹೋರಾಟಗಾರ, ವಕೀಲ, ರಾಜಕಾರಣಿ, ವಿದ್ವಾಂಸ ಮತ್ತು ಭಾರತದ ಮಾಜಿ ರಾಷ್ಟ್ರಪತಿ)

1963
12) ಝಕೀರ್ ಹುಸೇನ್ (ಸ್ವಾತಂತ್ರ್ಯ ಹೋರಾಟಗಾರ)
13) ಪಾಂಡುರಂಗ ವಾಮನ್ ಕಾನೆ, (ಭಾರತಶಾಸ್ತ್ರಜ್ಞ ಮತ್ತು ಸಂಸ್ಕೃತ ವಿದ್ವಾಂಸ)

1966
14) ಲಾಲ್ ಬಹದ್ದೂರ್ ಶಾಸ್ತ್ರಿ (ಮರಣೋತ್ತರ) (ಸ್ವಾತಂತ್ರ್ಯ ಹೋರಾಟಗಾರ ಮತ್ತು ಭಾರತದ ಮಾಜಿ ಪ್ರಧಾನಿ)
15) ಇಂದಿರಾ ಗಾಂಧಿ (ರಾಜಕಾರಣಿ ಮತ್ತು ಭಾರತದ ಮಾಜಿ ಪ್ರಧಾನಿ)

1975
16) ವರಾಹಗಿರಿ ವೆಂಕಟ ಗಿರಿ (ವಿವಿ ಗಿರಿ) (ಸ್ವಾತಂತ್ರ್ಯ ಹೋರಾಟಗಾರ ಮತ್ತು ಭಾರತದ ಮಾಜಿ ರಾಷ್ಟ್ರಪತಿ)

1976
17) ಕುಮಾರಸ್ವಾಮಿ ಕಾಮರಾಜ್ (ಮರಣೋತ್ತರ) (ರಾಜಕಾರಣಿ ಮತ್ತು ತಮಿಳುನಾಡು ಮಾಜಿ ಮುಖ್ಯಮಂತ್ರಿ)

1980
18) ಮದರ್ ಮೇರಿ ತೆರೇಸಾ ಬೊಜಾಕ್ಸಿಯು (ಮದರ್ ತೆರೇಸಾ) (ಮಿಷನರೀಸ್ ಆಫ್ ಚಾರಿಟಿಯ ಸ್ಥಾಪಕರು)

1983
19) ಆಚಾರ್ಯ ವಿನೋಬಾ ಭಾವೆ (ಮರಣೋತ್ತರ) (ಸ್ವಾತಂತ್ರ್ಯ ಕಾರ್ಯಕರ್ತ, ಸಮಾಜ ಸುಧಾರಕ)

1987
20) ಖಾನ್ ಅಬ್ದುಲ್ ಗಫರ್ ಖಾನ್ (ಸ್ವಾತಂತ್ರ್ಯ ಹೋರಾಟಗಾರ)

1988
21) ಮರುದೂರು ಗೋಪಾಲನ್ ರಾಮಚಂದ್ರನ್ (ಎಂಜಿಆರ್‌) (ಮರಣೋತ್ತರ) ( ನಟನೆಯಿಂದ ರಾಜಕಾರಣಕ್ಕೆ ಬಂದವರು)

1990
22) ಡಾ. ಭೀಮ್ ರಾವ್ ರಾಮ್‌ಜಿ ಅಂಬೇಡ್ಕರ್ (ಮರಣೋತ್ತರ) (ಸಮಾಜ ಸುಧಾರಕ)
23) ನೆಲ್ಸನ್ ರೋಲಿಹ್ಲಾ ಮಂಡೇಲಾ (ವರ್ಣಭೇದ ನೀತಿ ವಿರೋಧಿ ಕಾರ್ಯಕರ್ತ)

1991
24) ರಾಜೀವ್ ಗಾಂಧಿ (ಮರಣೋತ್ತರ) (ರಾಜಕಾರಣಿ, ಮಾಜಿ ಪ್ರಧಾನಿ)
25) ಸರ್ದಾರ್ ವಲ್ಲಭಭಾಯಿ ಪಟೇಲ್ (ಮರಣೋತ್ತರ) (ಸ್ವಾತಂತ್ರ್ಯ ಹೋರಾಟಗಾರ)
26) ಮೊರಾರ್ಜಿ ರಾಂಚೋಡ್ಜಿ ದೇಸಾಯಿ (ಸ್ವಾತಂತ್ರ್ಯ ಹೋರಾಟಗಾರ ಮತ್ತು ಭಾರತದ ಪ್ರಧಾನ ಮಂತ್ರಿ)

1992
27) ಮೌಲಾನಾ ಅಬುಲ್ ಕಲಾಂ ಆಜಾದ್ (ಮರಣೋತ್ತರ) (ಸ್ವಾತಂತ್ರ್ಯ ಕಾರ್ಯಕರ್ತ)
28) ಜಹಾಂಗೀರ್ ರತನ್‌ಜಿ ದಾದಾಭಾಯಿ ಟಾಟಾ (ಕೈಗಾರಿಕೋದ್ಯಮಿ)
29) ಸತ್ಯಜಿತ್ ರೇ (ಚಲನಚಿತ್ರ ನಿರ್ಮಾಪಕ)

1997
30) ಗುಲ್ಜಾರಿ ಲಾಲ್ ನಂದಾ (ಸ್ವಾತಂತ್ರ್ಯ ಕಾರ್ಯಕರ್ತ)
31) ಅರುಣಾ ಅಸಫ್ ಅಲಿ (ಮರಣೋತ್ತರ) (ಸ್ವಾತಂತ್ರ್ಯ ಕಾರ್ಯಕರ್ತೆ)
32) ಎ.ಪಿ.ಜೆ. ಅಬ್ದುಲ್ ಕಲಾಂ (ಏರೋಸ್ಪೇಸ್, ​​ರಕ್ಷಣಾ ವಿಜ್ಞಾನಿ ಮತ್ತು ಭಾರತದ ಮಾಜಿ ರಾಷ್ಟ್ರಪತಿ)

1998
33) ಮಧುರೈ ಷಣ್ಮುಖವಡಿವು ಸುಬ್ಬುಲಕ್ಷ್ಮಿ (ಕರ್ನಾಟಿಕ್ ಶಾಸ್ತ್ರೀಯ ಗಾಯಕಿ)
34) ಚಿದಂಬರಂ ಸುಬ್ರಮಣ್ಯಂ (ಸ್ವಾತಂತ್ರ್ಯ ಹೋರಾಟಗಾರ)
35) ಲೋಕಪ್ರಿಯಾ ಗೋಪಿನಾಥ್ ಬೊರ್ಡೊಲೊಯ್ (ಮರಣೋತ್ತರ) (ಸ್ವಾತಂತ್ರ್ಯ ಕಾರ್ಯಕರ್ತೆ)

1999
36) ಜಯಪ್ರಕಾಶ್ ನಾರಾಯಣ್ (ಮರಣೋತ್ತರ) (ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ)
37) ಅಮರ್ತ್ಯ ಸೇನ್ (ಅರ್ಥಶಾಸ್ತ್ರಜ್ಞ)
38) ರವಿಶಂಕರ್ (ಸಿತಾರ್ ವಾದಕ)

2001
39) ಲತಾ ದೀನಾನಾಥ್ ಮಂಗೇಶ್ಕರ್ (ಹಿನ್ನೆಲೆ ಗಾಯಕಿ)
40) ಉಸ್ತಾದ್ ಬಿಸ್ಮಿಲ್ಲಾ ಖಾನ್ (ಹಿಂದೂಸ್ತಾನಿ ಶಾಸ್ತ್ರೀಯ ಶೆಹನಾಯಿ ವಾದಕ)

2009
41) ಭೀಮಸೇನ್ ಗುರುರಾಜ್ ಜೋಶಿ (ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ)

2014
42) ಸಿಎನ್‌ ಆರ್‌ ರಾವ್ (ರಸಾಯನಶಾಸ್ತ್ರಜ್ಞ ಮತ್ತು ಪ್ರಾಧ್ಯಾಪಕ)
43) ಸಚಿನ್ ರಮೇಶ್ ತೆಂಡೂಲ್ಕರ್ (ಕ್ರಿಕೆಟಿಗ)

2015
44) ಅಟಲ್ ಬಿಹಾರಿ ವಾಜಪೇಯಿ (ರಾಜಕಾರಣಿ, ಮಾಜಿ ಪ್ರಧಾನಿ)
45) ಮದನ್ ಮೋಹನ್ ಮಾಳವೀಯ (ಮರಣೋತ್ತರ) (ವಿದ್ವಾಂಸ ಮತ್ತು ಶೈಕ್ಷಣಿಕ ಸುಧಾರಕ)

2019
46) ನಾನಾಜಿ ದೇಶಮುಖ್ (ಮರಣೋತ್ತರ) (ಸಾಮಾಜಿಕ ಕಾರ್ಯಕರ್ತ)
47) ಭೂಪೇಂದ್ರ ಕುಮಾರ್ ಹಜಾರಿಕಾ (ಮರಣೋತ್ತರ) (ಹಿನ್ನೆಲೆ ಗಾಯಕ, ಗೀತರಚನೆಕಾರ, ಸಂಗೀತಗಾರ, ಕವಿ ಮತ್ತು ಚಲನಚಿತ್ರ ನಿರ್ಮಾಪಕ)
48) ಪ್ರಣಬ್ ಮುಖರ್ಜಿ (ರಾಜಕಾರಣಿ ಮತ್ತು ಭಾರತದ ಮಾಜಿ ರಾಷ್ಟ್ರಪತಿ)
49) ಕರ್ಪೂರಿ ಠಾಕೂರ್ (ಮರಣೋತ್ತರ) (ರಾಜಕಾರಣಿ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ)

50) ಲಾಲ್ ಕೃಷ್ಣ ಅಡ್ವಾಣಿ (ರಾಜಕಾರಣಿ ಮತ್ತು ಮಾಜಿ ಉಪಪ್ರಧಾನಿ)
51) 2024 – ಪಿ.ವಿ.ನರಸಿಂಹರಾವ್ – ಮಾಜಿ ಉಪಪ್ರಧಾನಿ
52) 2024 – ಚೌಧರಿ ಚರಣ್ ಸಿಂಗ್ – ಮಾಜಿ ಉಪಪ್ರಧಾನಿ
53) 2024 – ಎಂ.ಎಸ್.ಸ್ವಾಮಿನಾಥನ್ – ಕೃಷಿ ವಿಜ್ಞಾನಿ

ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ
ಬಿಹಾರದ ಮಾಜಿ ಸಿಎಂ ಕರ್ಪೂರಿ ಠಾಕೂರ್‌ಗೆ ಮರಣೋತ್ತರ ‘ಭಾರತ ರತ್ನ’ ಪ್ರಶಸ್ತಿ

Leave a Reply

Your email address will not be published. Required fields are marked *

error: Content Copyright protected !!